Sunday, April 29, 2018



*ಓಶೋ ಮಾತುಗಳ ಆಧರಿಸಿ ರಚಿಸಿದ್ದು*

·       ದುಃಖ ಮರೆಮಾಚಿಕೊಳ್ಳಲು ಕೆಲವರು
ಬಾರಿಗೆ ಹೋದರೆ, ಕೆಲವರು ಮಂದಿರಕ್ಕೆ ಹೋಗುತ್ತಾರೆ.
ಧರ್ಮಕ್ಕಿಂತ ದೊಡ್ಡ ಷರಾಬು ಬೇರೊಂದಿಲ್ಲ !

·       ನಾನುವಿನ ಅಬ್ಬರದಲಿ
ನೀನು ಕಳೆದುಹೋದೆ,
ನಿನ್ನ ಹುಡುಕಾಟದಲ್ಲಿ
ನಾನು ಕರಗಿಹೋದೆ,
ಎಲ್ಲಾ ನೀನೇ ಆಗಿದ್ದೆ!

·       ಚಿತ್ತಸರೋವರದಲ್ಲಿ
ಉಬ್ಬರವಿಳಿತ ಇದ್ದೇ ಇದೆ.
ಶಾಂತವಾಗುವ ದಾರಿ ಅಗೋಚರ!

·       ನಿನ್ನ ಹಿಂದೆ
ನಾನು ಬಂದಾಗ
ಬೆಳಕು
ಎಂದು ಗುರು ಹೇಳಿದಾಗ
ನಾನು
ಅರ್ಥಮಾಡಿಕೊಳ್ಳಲಿಲ್ಲ!
ನಿನ್ನ
ಹಿಂಬಲಿಸಲಿಲ್ಲ!
ಬೆಳಕು
ಕಾಣಲಿಲ್ಲ!


·       ಸುಮ್ಮನಿರು
ಸುಮ್ಮನೆ ಇರು ಎಂದು 
ಗುರು ಹೇಳಿದಾಗ
ಕೈ,ಕಾಲು ಆಡಿಸದೆ ಕುಳಿತೆ,
ಬಾಯಿ ಮುಚ್ಚಿ ಕುಳಿತೆ,
ಮನದೊಳಗಿನ ಮಾತು-ಕ್ರಿಯೆ
ನಿಲ್ಲಿಸಲೇ ಇಲ್ಲ ,
ನಾನು
ಸುಮ್ಮನಾಗಲೇ ಇಲ್ಲ
ನಾನು
ಸುಮ್ಮನಾದರೆ
ನೀನು
ಕಾಣಬಹುದು
ಎಂದ ಗುರುವಿನ ಮಾತು
ನಾನು
ಅರಿಯಲಿಲ್ಲ
೨೦೧೭


No comments:

Post a Comment