Saturday, April 28, 2018

ಪರರಚಿಂತೆ ಎಮಗೇಕಯ್ಯ, ಎಮ್ಮ ಚಿಂತೆಯೇ ಎಮಗೆ ಹಾಸಲುಂಟು, 
ಹೊದೆಯಲುಂಟು, ನೆರಮನೆಯವರ ದುಃಖಕ್ಕೆ ಅಳುವವರ ಮೆಚ್ಚ 
ನಮ್ಮ ಕೂಡಲಸಂಗಮದೇವ.  
ಕಲಬೇಡ, ಕೊಲಬೇಡ, 
ಹುಸಿಯ ನುಡಿಯಲು ಬೇಡ,ತನ್ನ ಬಣ್ಣಿಸಬೇಡ, 
ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ ,
ಇದೇ ಬಹಿರಂಗ ಶುದ್ಧಿ , ಇದೇ ಕೂಡಲಸಂಗನ ಒಲಿಸುವ ಪರಿ 
ಎಂಬ ಬಸವಣ್ಣನವರ ವಚನದಂತೆ
ನಾವು ಇತರರ ವಿಷಯದಲ್ಲಿ ತಲೆಹಾಕದೆ, 
ನಮ್ಮೊಳಗಿನ ಶತ್ರುಗಳಾದ ಕಾಮ, ಕ್ರೋಧ, 
ಲೋಭ, ಮೋಹ, ಮಧ, ಮತ್ಸರಗಳನ್ನು ಕಡಿಮೆ
 ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿರುತ್ತೇವೋ 
ಆಗ ಗುರುವಿನ ಅನುಗ್ರಹ ಲಭ್ಯವಾಗುತ್ತದೆ. 
ಹೃದಯ ಪರಿಶುದ್ಧಗೊಳ್ಳುತ್ತದೆ. ಮೋಕ್ಷ ಸಿದ್ಧಿಯಾಗುತ್ತದೆ.

No comments:

Post a Comment