Saturday, April 28, 2018

ಮಾಧ್ಯಮಗಳ ಮಾರಮಾರಿಯಲ್ಲಿ
ಮಾನವೀಯತೆ ಮಾಯವಾಗಿ
ಎಡಪಂಥಿ ಬಲಪಂಥಿಗಳ ಒಳಜಗಳಗಳಲ್ಲಿ
ನಾಡು-ನುಡಿ-ಸಂಸ್ಕೃತಿಗಳ ದಿಕ್ಕಾಪಾಲು
ದೇಶದ ಏಕತೆಬಗ್ಗೆ ಇವರಿಗಿಲ್ಲ ಚಿಂತೆ ,
ತಮ್ಮ ತುತ್ತಿನಚೀಲ ತುಂಬುವಂತೆ
ಹಗರಣಗಳ ಸರಮಾಲೆಗಳಲಿ ಮುಳುಗೇಳುತ್ತಾ
ದೇವರು -ಧರ್ಮ- ರಾಷ್ಟ್ರದಬಗ್ಗೆ ಮಾತನಾಡಿದರೆ
ಕೆಸರೀಕರಣವೆನ್ನುತ್ತ 
ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಎತ್ತುವವರು
ಕುಲಕ್ಕೇ ಕೊಡಲಿಕಾವಾದವರು 
ಜಗಹತ್ತಿ ಉರಿವಾಗ ಸಿಗರೇಟು ಹಚ್ಹ್ಚಿಕೊಳ್ಳುವವರು 
ಮನೆಯಲ್ಲೇ ಹುತ್ತಕಟ್ಟಿ ಸರ್ಪಗಾಶ್ರಯದಾತರಾದವರು 



No comments:

Post a Comment