Friday, April 27, 2018


ಒಡೆಯಬೇಕಣ್ಣ ಅಹಂಕಾರದ ಮೊಟ್ಟೆಯನ್ನು
 ಪಟ್ ಎಂದು ನಾವು ಒಡೆಯಬೇಕಣ್ಣ.

 ಸುಲಿಯಬೇಕಣ್ಣ ಕಾಮ ಕ್ರೋಧಗಳೆಂಬೋ
 ಸಿಪ್ಪೆಗಳನು ಜತನದಿ ತೆಗೆಯಬೇಕಣ್ಣ
ನಾವು ತೆಗೆಯಬೇಕಣ್ಣ

ಜ್ಞಾನ ಭಕ್ತಿಗಳೆಂಬೋ ಬೀಜಗಳನ್ನ
 ಗುರುಕಾರುಣ್ಯವೆಂಬೋ ಉರಿಯಲ್ಲಿಟ್ಟು
ಹುರಿಯಬೇಕಣ್ಣ ನಾವು...ಹದವಾಗಿ ಹುರಿಯಬೇಕಣ್ಣ

ಮೋಹ ಮಾಯಾವೆಂಬ ಪರೆಯುಕಳಚುವಂತೆ
ಕೇರಬೇಕಣ್ಣ ನಾವು.. ಚೆನ್ನಾಗಿ ಕೇರಬೇಕಣ್ಣ

ಮಧ ಮತ್ಸರಗಳೆಂಬೋ ಕಸವನ್ನು
ವೈರಾಗ್ಯವೆಂಬೋ ಮೊರದೊಳಗಿಟ್ಟು
ನಾವು ಕೇರಬೇಕಣ್ಣ ನಾವುಕೇರಬೇಕಣ್ಣ 

ಹುರಿದ ಕಡಲೇಬೀಜವನ್ನು ಸವಿಯಲೆಂದು
ನೀಡಬೇಕಣ್ಣ ನಮ್ಮನಾರಸಿಂಹನೆಂಬೋದೇವಂಗೆ
ಪ್ರೇಮವೆಂಬೋದೊನ್ನೆಲಿಟ್ಟು ಬೇಡಬೇಕಣ್ಣ
ಪೂರ್ವಜನ್ಮದ ಪಾಪವೆಲ್ಲಾ ಕಳೆದು
ಹೋಗುವಂತೆ ನಾವು ಬೇಡಬೇಕಣ್ಣ 

ಹುರಿದಬೀಜವ ಸವಿವಹಾಗೆ
 ತನ್ನೊಳಗೆಮ್ಮ ಸೇರಿಸಿಕೊಳುವ
ನಮ್ಮ ಪ್ರಹ್ಲಾದವರದ ತಡಸಿಗಟ್ಟದ
ನಾರಸಿಂಹದೇವ ತಾನು ಒಲಿದು

No comments:

Post a Comment