Friday, April 27, 2018


ಬರೆ ಬೂದಿಯಾಗೋ
ದೇಹ್ದ್ಮೇಲೆ ಯಾಕಿಷ್ಟೋಂದ್ ಪ್ರೀತಿ
ಹೆಣ್ಣುಮಣ್ಣು ಆಸ್ತಿಪಾಸ್ತಿ ಮೇಲುಕೀಳು 
ಯಾಕೀ ತಾರತಮ್ಯ

ಹುಟ್ದೌನ್ ಗುರಿ 
ಸಾವಂತ್ಗೊತ್ತಿದ್ರೂ ಈರೀತಿ
ಯಾವನ್ಯಾವನ್ ಯಾವ್ಯಾವ್ರೀತಿ 
ಸಾಯ್ತಾನಂತ ಯಾರಿಗಾದ್ರೂ ಗೊತ್ತಾ
 ಸಾವನ್ನೋದು ಯಾವಾಗ್ಬತ್ತದೆ  ಅಂತ 
ತಿಳ್ಕಂಡೌನೇ ಜಾಣ,
ಹುಟ್ದಾಗಿಂದ ಸಾಯೋವರ್ಗೀ 
ಜೀವ್ನಾನ್ನೀ ಚನ್ನಾಗ್ಮಾಡೋಜಾಣ,
ಹುಟ್ಟುಸಾವ್ನ ಆಟ್ದೊಳ್ಗೆ 
ಪ್ರಾಣಾನೇ ನಮ್ದೇವ್ರು
ಮೂರೇಮೂರು ನಾಳದೊಳ್ಗೆ 
ದ್ಯಾವ್ರು ಸಂಚಾರಹೊಂಟಾಂತಂದ್ರೆ 
ನೀನೇ ಸಿವನಾಗ್ತಿ ಅಂತ 
ಗುರು ಸೀನಪ್ಪ ಹೇಳವ್ನೆ
ಜೀವ ಸಿವ ಆಗೋಗ್ಬೇಕು 
ಅದೇಕಣಾ ಜೀವ್ನ 
ಅದನ್ಬಿಟ್ಟು ಮಿಕ್ಕಿದ್ದೆಲ್ಲ 
ಬರೇಬೂದಿಕಣ.   
ಗುರ್ವಿನ್ಮಾತು 
ಶಿರ್ದಾಗಿಟ್ಕೊಂಡ್ಕಲಿಯವ್ನೇ ಜಾಣ 
ಇಲ್ದಿದ್ರೆ ಆಗ್ತೀಯ 
ನೀ ಮಾರಮ್ನಕೋಣ.

No comments:

Post a Comment