Saturday, April 28, 2018

ಕರವಜೋಡಿಸ ಬನ್ನಿ
ಈ ರಾಷ್ಟ್ರಕಾರ್ಯದಲಿ
ಜೀವನದಿಗಳ ರಕ್ಷಿಸಲು
ಒಂದಾಗಿ ಬನ್ನಿ !!


ತುಂಗಭದ್ರೆಕಾವೇರಿಯರ
ವರದ ವಾರಾಹಿ ಹೇಮಾವತಿಯರ
ಶರಾವತಿ ಅರ್ಕಾವತಿ ಅಘನಾಶಿನಿಯರ
ಕಬಿನಿ ಕಾಳಿ ಕುಮುಧ್ವತಿಯರ
ಶಾಂಭವಿಯೋ ಶಾಲ್ಮಲೆಯೋ
ಯಾರಾದರೇನಂತೆ 
ಜೀವ ನದಿಗಳ ಜೀವ 
ಉಳಿಸಲು ಒಂದಾಗಿ ಬನ್ನಿ!!

ಮರಗಳಿಲ್ಲದೆ ಮಳೆಯಿಲ್ಲ 

ಮಳೆಯಿಲ್ಲದೆ ನದಿಗಳಿಲ್ಲ
ನದಿಗಳಿಲ್ಲದೆ ಜೀವನವಿಲ್ಲ 

ಕೊರಗುತಿಹುದುಜಗವೆಲ್ಲ 
ಸೊರಗುತಿಹುದುಇಳೆಯೆಲ್ಲ
ನಾಡಹಸಿವ ಕಳೆಯಲು 
ಪರಿಸರವಉಳಿಸಿ 
ಬೆಳೆಸೋಣ ನಾವೆಲ್ಲ 
ಕರವ ಜೋಡಿಸಬನ್ನಿ
ಈ ರಾಷ್ಟ್ರಕಾರ್ಯದಲಿ
ಜೀವನದಿಗಳ ಉಳಿಸಲು 
ಒಂದಾಗಿ ಬನ್ನಿ

1 comment: