Saturday, April 28, 2018

ಭದ್ರಮ್ಮಾಶ್ರಮದೊಳು 
ವಾಸುದೇವಾಚಾರ್ಯರ 
ಪದತಲದಲ್ಲಿ ಕುಳಿತು
 ಧ್ಯಾನ,ಯೋಗ,ಪ್ರಾಣಾಯಾಮವ 
ಕಲಿತು ಯೋಗಿಯಾಗುವ ಅಸೆಯಯ್ಯಾ!!
ಅಲಸ್ಯ,ಸಮಯ ಅಭಾವ,
ನಿದ್ರಾಯೋಗಗಳೆಂಬ 
ತ್ರಿವಿಧಗಳಿಂದ ಬಾಧಿತನಯ್ಯಾ,
ಬಸ್ಸಲಿ ನಿಂತು ದೇಹಭಂಗಿಯ 
ಬದಲಿಸುವುದೇ ಯೋಗವಾಗಿ,
 ಕುಳಿತು ತೂಕಡಿಸುವುದೇ ಧ್ಯಾನವಾಗಿ, 
ಕಛೇರಿಯ ಮೆಟ್ಟಿಲ ಹತ್ತಿ ಇಳಿವಾ
ಪ್ರಾಣಾಯಾಮ ವಾಗಿದೆಯಯ್ಯಾ 
ಪತಂಜಲಿಶಾಖಾ ಒಡೆಯಾ 
ವಾಸುದೇವಾ ಎನ್ನಕಾಪಾಡು ಗುರುವೇ

No comments:

Post a Comment