Sunday, April 29, 2018



ಎಲ್ಲಿ ಹೋದವು ಆ
ಬಲಿದಾನದ ದಿನಗಳು
ಧ್ಯೇಯಕ್ಕಾಗಿ, ದೇಶಕ್ಕಾಗಿ
ತಾಯಿಗಾಗಿ, ಮಣ್ಣಿಗಾಗಿ
ಬಲಿಯಾದ ಆತ್ಮಗಳು
ಕೊಟ್ಟವಚನವು ಮರೆತು
ಹೋಯಿತೇ “ಅಮ್ಮಾ ನಿನ್ನ
ರಕ್ಷಣೆಗಾಗಿ ಮರಳಿ ಬರುವೆವು”
ಎಂದ ನುಡಿ ಸುಳ್ಳಾಯಿತೇನು?
ಸಿಡಿದೇಳದೇಕೆ ಮನ
ದೌರ್ಜನ್ಯವನು ಕಂಡಾಗ!
ವಿಸ್ಮೃತಿಯೇಕೆ
ತಾಯಕರೆ ಬಂದಾಗ!
ನಾವೇ ಅಲ್ಲವೇ ಅಂದು
ಬಲಿದಾನ ಮಾಡಿದವರು
ಕುದಿವುದಿಲ್ಲವೇಕೆ ನೆತ್ತರು ಇಂದು
ತಾಯಿಗಾಗಿ , ತಾಯ್ನೆಲಕ್ಕಾಗಿ


No comments:

Post a Comment