Tuesday, September 9, 2014

vachanagaLu basavaNNa , urilimga peddi



ವಚನಗಳು
ಬಸವಣ್ಣನವರು ತಮ್ಮ ವಚನದಲ್ಲಿ ಮನುಷ್ಯ ಮನುಷ್ಯರ ನಡುವೆ ಇರಬೇಕಾದ ಮಾನವೀಯ ಅಂತಃಕರಣಾನ್ನು , ಹೃದಯವೈಶಾಲ್ಯತೆಯನ್ನು ಇಲ್ಲಿ ತಿಳಿಸುತ್ತಾರೆ.
ಮನಮನಗಳು ಬೆರೆತಾಗ ಅಹಂಕಾರಕ್ಕೆ ಸ್ಥಳವಿರದಂತೆ ತನು ಕರಗುತ್ತದೆ. ಪರಸ್ಪರ ಸ್ಪರ್ಶಿಸಿದಾಗ ದೇಹ ಪುಳಕಗೊಳ್ಳುತ್ತದೆ. ಪ್ರಿಯರನ್ನು ಕಂಡಾಗ ಅಶ್ರುಜಲ (ಕಣ್ಣೀರು) ಉಕ್ಕಿಹರಿಯುತ್ತದೆ. ಪರಸ್ಪರ ಮಾತನಾಡಿದಾಗ ಧ್ವನಿ ಆರ್ದ್ರಗೊಳ್ಳುತ್ತದೆ. ಇಂತಹ ಭಾವಗಳು ಭಕ್ತನಲ್ಲಿರಬೇಕು. ಆದರೆ ಎನ್ನಲ್ಲಿ ಇಂತಹ ಚಿಹ್ನೆ ಇಲ್ಲವಾದುದರಿಂದ ನಾನು ಡಂಬಕನೇ ಸರಿ ಎಂದು ಬಸವಣ್ಣ ಭಾವಿಸುತ್ತಾರೆ. ಭಕ್ತನಿಗೆ ಪ್ರೀತಿ, ವಿಶ್ವಾಸ , ಮಾನವೀಯತೆಯ ಗುಣಗಳಿರಬೇಕು ಭಕ್ತಿಗೆ ಇವೇ ಬೇಕಾಗಿರುವಂತಹುದು ( ಭಗವಂತನಲ್ಲಿ ವ್ಯಾಪಾರ ಮಾಡಬಾರದು ಪ್ರೀತಿ ಹೊಂದಿರಬೇಕು/ ನಿಷ್ಕಾಮ ಭಕ್ತಿ ಎಂದೂ ಹೇಳಬಹುದು.)
ಶಿವಪಥವನ್ನು ಅರಿಯದವರು ಕೈಯಲ್ಲಿ ಲಿಂಗವನ್ನು ಹಿಡಿದು ಪುಷ್ಪಗಳಿಂದ ಅರ್ಚಿಸಿದ ಮಾತ್ರಕ್ಕೆ ಅದು ಸದ್ಭಕ್ತಿಯ ಲಕ್ಷಣವಲ್ಲ. ಶಿವಪಥವನ್ನು ಅರಿಯುವುದು ಮುಖ್ಯ. ಇದನ್ನೇ ಬಸವಣ್ಣನವರು ಅರ್ಥರೇಖೆ ಇದ್ದು ಅನುಭವಿಸಲು ಆಯುಷ್ಯರೇಖೆ ಇಲ್ಲದಿದ್ದರೆ ಫಲವೇನು (ಕೋಟಿಕೋಟಿ ಹಣವಿದ್ದು ಅದರ ಸದುಪಯೋಗಮಾಡಿಕೊಳ್ಳಲು ಆಯುಷ್ಯವೇ ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಅಲ್ಲವೇ?), ಹೇಡಿಯ ಕೈಯಲ್ಲಿ ಚಂದ್ರಾಯುಧಇದ್ದು ಫಲವೇನು?(ಹೇಡಿಯಾದವನ ಕೈಯಲ್ಲಿ ಯಾವುದೇ ಶಸ್ತ್ರವಿದ್ದರೂ ಅದರ ಬಳಕೆ ಅವನಿಗೆ ಸಾಧ್ಯವಾಗದೆ ವ್ಯರ್ಥವಾಗುತ್ತದೆ)ಕುರುಡನಾದವನ ಕೈಯಲ್ಲಿ ರುವ ಕನ್ನಡಿ, ಕೋತಿಯಕೈಯಲ್ಲಿರುವ ಮಾಣಿಕ್ಯ ಎರಡೂ ವ್ಯರ್ಥ. ರತ್ನದ ಬೆಲೆ ಅರಿತವನಿಗೇ ರತ್ನದ ಮಹತ್ವ ಅಂತೆಯೇ ಶಿವಲಿಂಗವನ್ನು ಶಿವಪಥದಲ್ಲಿ ಇಲ್ಲದವನು ಹೇಗೆ ತಿಳಿಯಲು ಸಾಧ್ಯ ಎಂದಿದ್ದಾರೆ.
ಕಾಯುವದೈವವೇ ಕೊಲ್ಲಲು ಬಂದರೆ ಯಾರಬಳಿ ದೂರು ಹೇಳುವುದು. (ಕಾವರೇ ಕಣೆಗೊಂಡರ್ –ನಾಗಚಂದ್ರ) ಬೇಲಿಯೇ ಹೊಲ ಮೇಯ್ದರೆ ಇನ್ನಾರಿಗೆ ಕೇಳೋಣ ಎಂಬ ವಿಚಾರಗಳನ್ನೇ ಈ ವಚನದಲ್ಲಿ ವಿವರಿಸಿದ್ದಾರೆ. ಒಲೆಯು ಹತ್ತಿ ಉರಿದಾಗ ಬಿಸಿಯ ಝಳದಿಂದ ತಪ್ಪಿಸಿಕೊಳ್ಳಲು ದೂರ ನಿಲ್ಲಬಹುದು. ಆದರೆ ನಮ್ಮ ಕಾಲ ಅಡಿಯಲ್ಲಿರುವ ಭೂಮಿಯೇ ಹತ್ತಿ ಉರಿಯತೊಡಗಿದರೆ ನಿಲ್ಲುವುದೆಲ್ಲಿ?  ಕೆರೆಯ ನೀರನ್ನು ಹಿಡಿದಿಡಲಿ ಎಂದು ಕಟ್ಟಿದ ಏರಿ(ಮಣ್ಣಿನ ದಿಬ್ಬ) ಕೆರೆಯ ನೀರನ್ನೆಲ್ಲಾ ಕುಡಿದುಬಿಟ್ಟರೆ, ಹೊಲದ ರಕ್ಷಣೆಗೆಂದು ನಿರ್ಮಿಸಿದ ಬೇಲಿಯೇ ಹೊಲವನ್ನು ಮೇಯ್ದರೆ(  ನಂಬಿದವ್ಯಕ್ತಿಗಳು ಅತ್ಯಾಚಾರಿಗಳಾಗುತ್ತಿರುವ ಇಂದಿನ ಸಂದರ್ಭದಲ್ಲಿ ಈ ವಚನ ಸೂಕ್ತವಾಗುತ್ತದೆ) ಮನೆಯ ಹೆಣ್ಣು ತನ್ನ ಮನೆಯಲ್ಲೇ  ಕಳವು ಮಾಡಿದಾಗ, ತಾಯಿಯ ಹಾಲೇ ವಿಷವಾಗಿ ಮಗುವನ್ನು ಕೊಂದರೆ ಯಾರಿಗೆ ದೂರು ಹೇಳುವುದು.

ಉರಿಲಿಂಗ ಪೆದ್ದಿಯ ವಚನಗಳು.
ಶಿವ ಹಾಗೂ ಶಿವಲಿಂಗದಲ್ಲಿ ಯಾವುದೇ ಬೇಧವಿಲ್ಲಎಂಬುದನ್ನು ಉದಾಹರಣೆಗಳ ಮೂಲಕ ಇಲ್ಲಿ ಸಾರಿದ್ದಾನೆ.  ಸೂರ್ಯನಿಲ್ಲದೆ ಹಗಲು ಇರುವುದಿಲ್ಲ, ದೀಪವಿಲ್ಲದೆ ಬೆಳಕು, ಹೂವಿಲ್ಲದೆ ಪರಿಮಳ ಅಂತೆಯೇ ಅತಿಶ್ರೇಷ್ಠವಾದ ವಿಚಾರವು ಶಿವನಿಂದ ಮಾತ್ರವೇ ತೋರಿಸಲ್ಪಡುವುದು
ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದೆ. ದೀಪ ಹಾಗೂ ಸೂರ್ಯನನ್ನು ಬಿಟ್ಟು ಬೆಳಕಿನ ಬಗ್ಗೆ ಯೋಚಿಸಲು ಸಾಧ್ಯವೇಇಲ್ಲ ಅಂತೆಯೇ ಹೂವಿಲ್ಲದೆ ಪರಿಮಳದ ಯೋಚನೆ ಮಾಡಲು ಸಾಧ್ಯವೇ ಎಲ್ಲವೂ ಶಿವನಿಂದ ಆಗಿರುವುದರಿಂದ ಎಲ್ಲೆಡೆ ಶಿವನೇ ತೋರುತ್ತಿದ್ದಾನೆ.
ಸ್ಪರ್ಶಮಣಿಯು ಮುಟ್ಟಿದ್ದನ್ನು ಚಿನ್ನವಾಗಿಸುವ ಶಿಲೆ.  ಇದರಿಂದ ಮಾಡಿದ ಮನೆಯಲ್ಲಿ ವಾಸಿಸುವವನು ಎಂದಾದರೂ ಭಿಕ್ಷೆಗೆ ಹೋಗುವನೇ? ಸದಾ ಶುಭ್ರಜಲ ಹರಿವ ತೊರೆಯಲ್ಲಿ ನಿಂತಿರುವ ವ್ಯಕ್ತಿ ಬಾಯಾರಿತು ಎಂದು ಕೆರೆಯನ್ನು ಹುಡುಕಿ ಹೋಗುವುದಿಲ್ಲ. ಅಂತೆಯೇ ಮಂಗಳಕರವಾದ ಲಿಂಗವನ್ನು ಧರಿಸಿದ ವ್ಯಕ್ತಿ ಇತರ ದೈವವನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.
ಗುರುವಾದವರು ಲಘುವಾಗಿ ವರ್ತಿಸಬಾರದು ಗುರು ಗುರುವೇ ಲಘು ಲಘುವೇ ಗುರು ಲಘುವಾಗಿ ವರ್ತಿಸಿದರೆ ಅದು ಅನಾಚಾರ. ಗುರು ಲಿಂಗ ಜಂಗಮವನ್ನು ಲಘುವಾಗಿ ಕಂಡವ್ಯಕ್ತಿ ತಾನೇ ಲಘುವಾಗುವನು ಎಂದು ಇಲ್ಲಿ ಹೇಳುತ್ತಾನೆ.
ಹಿರಿಯರು ತಮ್ಮ ಹಿರಿತನ ಬಿಟ್ಟು ಸಣ್ಣತನತೋರಿದಾಗ ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳೂತ್ತಾರೆ. ಅವರು ಮರ್ಯಾದೆ ಕಳೆದುಕೊಂಡಾಗ ಅದು ಅಪಚಾರ. ಹಾಗಾಗಿ ತಮ್ಮ ತಮ್ಮ ನಡವಳಿಕೆ ತಮ್ಮ ತಮ್ಮ ಘನತೆಗೆ ತಕ್ಕಂತೆ ಇರಬೇಕು ಎಂಬುದು ಇವನ ಆಶಯ.

Tuesday, September 2, 2014

Abraham Lincoln’s letter to his son’s Head Master


Abraham Lincoln’s letter to his son’s Head Master

Respected Teacher,

My son will have to learn I know that all men are not just, all men are not true. But teach him also that for ever scoundrel there is a hero; that for every selfish politician, there is a dedicated leader. Teach him that for every enemy there is a friend.

It will take time, I know; but teach him, if you can, that a dollar earned is far more valuable than five found.

Teach him to learn to lose and also to enjoy winning.

Steer him away from envy, if you can.

Teach him the secret of quite laughter. Let him learn early that the bullies are the easiest to tick.

Teach him, if you can, the wonder of books.. but also give him quiet time to ponder over the eternal mystery of birds in the sky, bees in the sun, and flowers on a green hill –side.

In school teach him it is far more honourable to fail than to cheat.

Teach him to have faith in his own ideas, even if every one tells him they are wrong.

Teach him to be gentle with gentle people and tough with the tough.

Try to give my son the strength not to follow the crowd when every one is getting on the bandwagon.

Teach him to listen to all men but teach him also to filter all he hears on a screen of truth and take only the good that comes through.

Teach him, if you can, how to laugh when he is sad. Teach him there is no shame in tears. Teach him to scoff at cynics and to beware of too much sweetness.

Teach him to sell his brawn and brain to the highest bidders; but never to put a price tag on his heart and soul.

Teach him to close his ears to a howling mob… and to stand and fight if he thinks he’s right.

Treat him gently; but do not cuddle him because only the test of fire makes fine steel.

Let him have the courage to be impatient, let him have the patience to be brave. Teach him always to have sublime faith in himself because then he will always have sublime faith in mankind.

This is a big order; but see what you can do. He is such a fine little fellow, my son.


Abraham Lincoln.


muddaNa kavi parichaya

ಮುದ್ದಣ ಹುಟ್ಟಿದ್ದು ಉಡುಪಿಗೆ ಸಮೀಪದ ನಂದಳಿಕೆ ಎಂಬ ಗ್ರಾಮದಲ್ಲಿ, 1870ರ ಜನವರಿ 24ರಲ್ಲಿ. ಅವನ ನಿಜವಾದ ಹೆಸರು ಲಕ್ಷ್ಮೀನಾರಣಪ್ಪ. ಈ ಕವಿ ಬದುಕಿದ್ದು ಮೂವತ್ತೊಂದು ವರ್ಷ ಮಾತ್ರ. ಇಂಗ್ಲಿಷ್ ಶಾಲಾ ವಿದ್ಯಾಭ್ಯಾಸ ಇರದ ಈ ಕವಿ ಶಾಲೆಯೊಂದರಲ್ಲಿ ವ್ಯಾಯಾಮ ಶಿಕ್ಷಕನಾಗಿ ದುಡಿದ. ಶ್ರಮಪಟ್ಟು ಹಳಗನ್ನಡ ಕಾವ್ಯಾಭ್ಯಾಸ ಮಾಡಿ ಅದರಲ್ಲಿ ಆಳವಾದ ಪಾಂಡಿತ್ಯ ಸಾಧಿಸಿಕೊಂಡ. ಮೊದಲು `ರತ್ನಾವಳೀ ಕಲ್ಯಾಣ~, `ಕುಮಾರ ವಿಜಯ~ ಎಂಬ ಎರಡು ಯಕ್ಷಗಾನಗಳನ್ನು ಬರೆದ. ಮುಂದೆ ಹಳಗನ್ನಡ ಭಾಷೆಯಲ್ಲಿ `ಅದ್ಭುತ ರಾಮಾಯಣ~, `ರಾಮಪಟ್ಟಾಭಿಷೇಕ~ ಮತ್ತು `ರಾಮಾಶ್ವಮೇಧ~ ಕೃತಿಗಳನ್ನು ರಚಿಸಿದ. ಈ ಮೂರೂ ಕೃತಿಗಳೂ ರಾಮಕಥೆಯನ್ನೇ ಆಧರಿಸಿದವು.

ಅವುಗಳಲ್ಲಿ `ರಾಮಪಟ್ಟಾಭಿಷೇಕ~ ಪದ್ಯ ರೂಪದಲ್ಲಿದ್ದರೆ ಉಳಿದೆರಡೂ ಗದ್ಯದಲ್ಲಿದೆ. ಇವುಗಳಲ್ಲಿ `ರಾಮಾಶ್ವಮೇಧ~ ಹೆಚ್ಚು ಕಾವ್ಯಸತ್ವದಿಂದ ಕೂಡಿದೆ. ಅವನು `ಗೋದಾವರಿ~ ಎಂಬ ಕಾದಂಬರಿಯೊಂದರ ಸ್ವಲ್ಪ ಭಾಗ ಬರೆದಿದ್ದ. ಅದು ಹಸ್ತಪ್ರತಿ ರೂಪದಲ್ಲೇ ಕಣ್ಮರೆಯಾಗಿ ಹೋಯಿತು. `ಜೋ ಜೋ~ ಎಂಬ ಶಬ್ದಾರ್ಥ ಸಂಬಂಧ ಸಂಶೋಧನ ಲೇಖನವೊಂದನ್ನು `ಚಕ್ರಧಾರಿ~ ಎಂಬ ಕಾವ್ಯನಾಮದಿಂದ `ಸುವಾಸಿನಿ~ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ಆದರೆ ತನ್ನ ಕೃತಿಗಳನ್ನು ತನ್ನ ಸ್ವಂತ ರಚನೆಗಳೆಂದು ತಿಳಿಸದೆ ಹಿಂದಿನ ಯಾರೋ ಹಳಗನ್ನಡ ಕವಿ ಬರೆದದ್ದೆಂದು ಕಥೆ ಕಟ್ಟಿದ. ಹೆಚ್ಚು ವಿದ್ಯಾಭ್ಯಾಸವಿಲ್ಲದ, ವ್ಯಾಯಾಮ ಶಿಕ್ಷಕನಾದ ತಾನು ಬರೆದದ್ದೆಂದು ಹೇಳಿದರೆ ಅವುಗಳಿಗೆ ತಕ್ಕ ಪುರಸ್ಕಾರ ಸಿಗದೆ ಉದಾಸೀನಕ್ಕೆ ಪಕ್ಕಾಗಬಹುದು ಎಂಬ ಕಾರಣಕ್ಕೆ ಹೀಗೆ ಮಾಡಿದ. ಅವನ ಮೂರು ರಾಮ ಕಥೆಗಳೂ ಮೈಸೂರಿನ `ಕಾವ್ಯ ಮಂಜರಿ~ ಮತ್ತು `ಕಾವ್ಯ ಕಲಾನಿಧಿ~ ಮಾಸಪತ್ರಿಕೆಗಳಲ್ಲಿ ಭಾಗ ಭಾಗವಾಗಿ, ಪೂರ್ತಿ ಪ್ರಕಟವಾದುವು. `ರಾಮಾಶ್ವಮೇಧ~ ಪೂರ್ತಿ ಪ್ರಕಟ ಆದದ್ದನ್ನು ಅವನು ನೋಡಲೇ ಇಲ್ಲ. ಒಂದು ವರ್ಷದ ಚಿಕ್ಕ ಗಂಡು ಮಗು ಮತ್ತು ಪತ್ನಿಯನ್ನು ಬಿಟ್ಟು 1901ರಲ್ಲಿ ಕ್ಷಯ ರೋಗಕ್ಕೆ ಒಳಗಾಗಿ ತೀರಿಕೊಂಡ ಅವನ ಜೀವನವೊಂದು ದುರಂತ ಕಥೆಯಾಗಿ ಹೋಯಿತು. ಲಕ್ಷ್ಮೀನಾರಣಪ್ಪನೇ ಮುದ್ದಣನೆಂದೂ ರಾಮಕಥೆಗಳೆಲ್ಲ ಅವನದೇ ಎಂದು ಲೋಕಕ್ಕೆ ತಿಳಿದದ್ದು ಅವನ ಮರಣಾನಂತರವೇ.

vibhakti

«¨sÀQÛ¥ÀævÀåAiÀÄ


ºÉƸÀUÀ£ÀßqÀ

ºÀ¼ÀUÀ£ÀßqÀ

¥ÀæxÀªÀiÁ «¨sÀQÛ
G
gÁªÀÄ£ÀÄ
ªÀiï
gÁªÀÄA
¢éwÃAiÀiÁ«¨sÀQÛ
C£ÀÄß
gÁªÀÄ£À£ÀÄß
CA
gÁªÀÄ£ÀA
vÀÈwÃAiÀiÁ«¨sÀQÛ
EAzÀ
gÁªÀĤAzÀ
EA
gÁªÀĤA
ZÀvÀÄyð«¨sÀQÛ
UÉ, PÉ, EUÉ, CPÉÌ
gÁªÀĤUÉ
UÉ, PÉ, EUÉ, CPÉÌ
gÁªÀÄAUÉ
¥ÀAZÀ«Äë¨sÀQÛ
zɸɬÄAzÀ
gÁªÀÄ£À zɸɬÄAzÀ
CvÀÛtÂA
gÁªÀÄ£ÀvÀÛtÂA
µÀ¶×à «¨sÀQÛ
C
gÁªÀÄ£À
C
gÁªÀÄ£À
¸À¥ÀÛ«Äà «¨sÀQÛ
C°è
gÁªÀÄ£À°è
M¼ï
gÁªÀÄ£ÉƼï
¸ÀA¨ÉÆÃzsÀ£Á «¨sÀQÛ
ºÉÃ, K , EgÁ
ºÉà gÁªÀiÁ
ºÉÃ, K , EgÁ
ºÉà gÁªÀiÁ

ನಾಲಿಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು

ನಾಲಿಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು
ನಾಲಿಗೆ ಎಂಬುದು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳದವರಿಗೆ ಈ ಮಾತನ್ನು ಹಿರಿಯರು ಹೇಳಿದ್ದಾರೆ.  ಪ್ರಸ್ತುತ ಚುನಾವಣೆ ಸಂದರ್ಭದಲ್ಲಿ ಒಬ್ಬರಮೇಲೆ ಮತ್ತೊಬ್ಬರು ಎರಚುವ ಕೆಸರನ್ನು ನೋಡುತ್ತಾ , ಕೇಳುತ್ತಾ ಇರುವ ನಾವು ಒಮ್ಮೆ ಈ ಮಾತಿನ ಬಗ್ಗೆ ಯೋಚಿಸುವುದು ಒಳಿತು. ಮಾನ್ಯ ಶತಾವಧಾನಿ ರಾ.ಗಣೇಶ್ ಅವರ ನಾಲಿಗೆ ತೇವವಾದ ಸ್ಥಳದಲ್ಲಿರುವುದರಿಂದ ಸದಾ ಜಾರುತ್ತಿರುತ್ತದೆ. ಅದನ್ನು ಜಾರದಂತೆ ನೋಡಿಕೊಳ್ಳಿ ಎಂಬ ಮಾತು ಎಲ್ಲರಿಗೂ ಸಾರಿ ಸಾರಿ ಹೇಳಬೇಕೆನಿಸುತ್ತದೆ.

ಯದ್ಯದಾಚರತಿ ಶ್ರೇಷ್ಠಃ ....  ಎಂಬ ಸಂಸ್ಕೃತ ಸುಭಾಷಿತದಲ್ಲಿ ಶ್ರೇಷ್ಠರಾದ ಜನರು ಹೇಗೆ ವರ್ತಿಸುತ್ತಾರೋ ಅಂತೆಯೇ ಇತರ ಜನರೂ ವರ್ತಿಸುತ್ತಾರೆ ಎಂದು ಹೇಳಿದಂತೆ ನಮ್ಮ ನಾಲಿಗೆ ನಮ್ಮ ಹಿಡಿತದಲ್ಲಿ ಇದ್ದಷ್ಟೂ ಇಡೀ ಪ್ರಪಂಚ ನಮ್ಮನ್ನು ಗೌರವಿಸುತ್ತದೆ. ಎಲ್ಲ ಜೀವಿಗಳು ಒಳ್ಳೆಯದನ್ನೇ ¸ಒಳ್ಳೆಯ ಮಾತುಗಳನ್ನೇ ಕೇಳಲು ಇಷ್ಟಪಡುವಾಗ  ಅಹಿತವಾಗಿ ಏಕೆ ಮಾತನಾಡಬೇಕು. ಸಂಸ್ಕೃತ ಸುಭಾಷಿತವೊಂದು ವಚನೇಕಾ ದರಿದ್ರತಾ ? ಎಂದು ಕೇಳುತ್ತದೆ. ಮಾತನಾಡುವಲ್ಲಿಯೂ ದಾರಿದ್ರ್ಯವೇಕೆ? ಎಂದು ಪ್ರಶ್ನಿಸಿದೆ.

ನಮ್ಮ ನಮ್ಮ ಸಂಸ್ಕಾರಕ್ಕೆ ತಕ್ಕಹಾಗೆ ನಮ್ಮ ಮಾತು- ನಡೆ ನುಡಿ ಇರುತ್ತದೆ. ಪಂಚತಂತ್ರದ ಕಥೆಯೂ ಇದನ್ನೇ ಹೇಳುತ್ತದೆ. ಎರಡು ಗಿಳಿಗಳ ಕಥೆ : ಒಂದೇ ಗಿಳಿಯ ಎರಡು ಮರಿಗಳಲ್ಲಿ ಒಂದು ಬೇಟೆಗಾರರ ಬಳಿಯಲ್ಲಿಯೂ ಇನ್ನೊಂದು  ಸನ್ಯಾಸಿಗಳ ಆಶ್ರಮದಲ್ಲಿಯೂ ಬೆಳೆದು ತಮ್ಮ ತಮ್ಮ ಸಂಸ್ಕಾರಕ್ಕೆ ತಕ್ಕಹಾಗೆ ಮಾತನಾಡುವುದನ್ನು ನೋಡುತ್ತೇವೆ. ಬೇಟೆಗಾರರ ಬಳಿ ಬೆಳೆದ ಗಿಳಿ ಹೊಡಿ!, ಬಡಿ!, ಕೊಲ್ಲು! ಎಂದೆಲ್ಲಾ ಹೇಳಿದರೆ, ಸನ್ಯಾಸಿಗಳ ಬಳಿ ಬೆಳೆದ ಗಿಳಿಯು ಬನ್ನಿ,  ಕುಳಿತುಕೊಳ್ಳಿ, ನೀರು ಕುಡಿಯಿರಿ, ಫಲ ಸ್ವೀಕರಿಸಿ, ಎಂದೆಲ್ಲಾ ಉಪಚರಿಸುತ್ತದೆ.

ಮಹಾಭಾರತದಲ್ಲಿ ಇದಕ್ಕೆ ಆಧಾರವಾಗಿ ಮತ್ತೊಂದು ಕಥೆಯೊಂದು ಇದೆ. ಗುರು ದ್ರೋಣರು ತಮ್ಮ ಶಿಷ್ಯರನ್ನು ಪರೀಕ್ಷಿಸಲು ಮನಸ್ಸು ಮಾಡಿ ದುರ್ಯೋಧನನನ್ನು ಕರೆದು ಹಸ್ತಿನಾವತಿಯನ್ನು ಒಂದು ಸುತ್ತುಹಾಕಿ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಹುಡುಕಿ ಕರೆದು ತಾ ಎಂದು ಹೇಳಿದರು. ಆದರೆ ದುರ್ಯೋಧನನಿಗೆ ಎಲ್ಲರೂ ಕೆಟ್ಟವರಂತೆಯೇ ಕಾಣುತ್ತಾರೆ. ಅವನು ಹಿಂದಿರುಗಿ ಬಂದು ಗುರುಗಳೊಂದಿಗೆ ತನಗೆ ಇಡೀ ಹಸ್ತಿನಾವತಿಯಲ್ಲಿ ಯಾರೂ ಒಳ್ಳೆಯವರು ಕಾಣಲಿಲ್ಲ ಎಂದು ಹೇಳುತ್ತಾನೆ. ಅಂತೆಯೇ ಧರ್ಮರಾಜ ಯುಧಿಷ್ಠಿರರನ್ನು ಕರೆದು ಹಸ್ತಿನಾವತಿಯನ್ನು ಒಂದು ಸುತ್ತುಹಾಕಿ ಒಬ್ಬ ಕೆಟ್ಟ ವ್ಯಕ್ತಿಯನ್ನು ಹುಡುಕಿ ಕರೆದು ತಾ ಎಂದು ಹೇಳಿದರು. ಆದರೆ ಯುಧಿಷ್ಟಿರನಿಗೆ ಎಲ್ಲರೂ ಒಳ್ಳೆಯವರಂತೆಯೇ ಕಾಣುತ್ತಾರೆ. ಅವನು ಹಿಂದಿರುಗಿ ಬಂದು ಗುರುಗಳೊಂದಿಗೆ ತನಗೆ ಇಡೀ ಹಸ್ತಿನಾವತಿಯಲ್ಲಿ ಯಾರೂ ಕೆಟ್ಟವರು ಕಾಣಲಿಲ್ಲ ಎಂದು ಹೇಳುತ್ತಾನೆ. ತಾವು ಹೇಗೆ ನೋಡುತ್ತಾರೆ ಹಾಗೆಯೇ ಸಮಾಜ ಕಾಣುತ್ತದೆ. ಯದ್ಭಾವಂ ತದ್ಭವತಿ ಎಂಬಂತೆ ದೃಷ್ಟಿ ಯಂತೆ ನೋಟವಿರುತ್ತದೆ

ಮಹಾಪುರುಷರಾದವರು ಮಾತು ಮನಸ್ಸು ಕ್ರಿಯೆಗಳಲ್ಲಿ ಒಂದೇರೀತಿಯಲ್ಲಿ ಇರುತ್ತಾರೆ ಎಂದು ಸುಭಾಷಿತವೊಂದು ತಿಳಿಸುತ್ತದೆ. (ಚಿತ್ತೇವಾಚಿ ಕ್ರಿಯಾಯಾಂಚ ಸಾಧೂನಾಂ ಏಕ ರೂಪತಃ)

ಒಮ್ಮೆ ನಾಲಿಗೆಗೂ ಹಲ್ಲಿಗೂ ಜಗಳ ಬಂದಾಗ ನಾಲಿಗೆಯು ತಾನು ಹೆಚ್ಚು ಏಕೆಂದರೆ ನಾನು ಮಾತನಾಡಬಲ್ಲೆ, ಚಲಿಸಬಲ್ಲೆ ನಿಮಗೆ ಈ ಕೆಲಸ ಸಾಧ್ಯವಿಲ್ಲ ಎಂದಾಗ,  ಹಲ್ಲುಗಳು ಅದು ಹೇಗೆ ಮಾತನಾಡುವೆ, ಹೇಗೆ ಚಲಿಸುವೆ ನಾವು ನೋಡುತ್ತೇವೆ. ಎಂದು ನಾಲಿಗೆ ಸವಾಲು ಹಾಕಿ,  ನಾವು ಮೂವತ್ತೆರಡು ನೀನೋ ಒಬ್ಬ ಎಂದು ನಾಲಿಗೆಯನ್ನು ಚಲಿಸಲು ಬಿಡದ ಹಾಗೆ ಕಚ್ಚಲು ಸಿದ್ಧರಾಗುವುದಲ್ಲದೆ ಚಲಿಸದಂತೆ ಕಚ್ಚಿ ನೋಯಿಸುತ್ತವೆ, ಆಗ ನೋವನ್ನು ಅನುಭವಿಸಿದ ನಾಲಿಗೆಯು ಹಲ್ಲುಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಪೈಲ್ವಾನನೊಬ್ಬನನ್ನು ನಿಂದಿಸಿ ಮಾತನಾಡುತ್ತದೆ. ಆತ ಹೊಡೆದ ಹೊಡೆತಕ್ಕೆ ನಾಲ್ಕು ಹಲ್ಲುಗಳು ಉದುರುತ್ತವೆ. ಆ ಕೂಡಲೇ ಹಲ್ಲುಗಳು  ನಾಲಿಗೆಗೆ ಶರಣಾಗುತ್ತವೆ. ಹೀಗೆ ನಾಲಿಗೆಯಿಂದ ಏನೆಲ್ಲಾ ಸಾಧ್ಯ ಎಂಬುದನ್ನೇ ಮಾತು ಮುತ್ತು, ಮಾತು ಮೃತ್ಯು ಮಾತು ಬೆಳ್ಳಿ ಮೌನ ಬಂಗಾರ , ಊಟಬಲ್ಲವನಿಗೆ ರೋಗವಿಲ್ಲ , ಮಾತುಬಲ್ಲವನಿಗೆ ಜಗಳವಿಲ್ಲ. ಎಂಬ ಗಾದೆಗಳು ಕೂಡ ತಿಳಿಸುತ್ತವೆ. ಅವಶ್ಯವಿದ್ದಾಗ ಮಾತನಾಡುತ್ತಾ,  ಅವಶ್ಯಕತೆ ಇಲ್ಲದಾಗ ಮೌನವಹಿಸುವುದು ಉತ್ತಮರ ಲಕ್ಷಣವಾಗಿರುತ್ತದೆ. ಯಾರು ತಮ್ಮ ಮಾತಿನ ಬಗ್ಗೆ ಹಿಡಿತ ಹೊಂದಿರುತ್ತಾರೋ ಅವರು ಜಗತ್ತನ್ನು ಆಳಬಲ್ಲರು ಅಲ್ಲವೇ?



****

sanskruth sambhashane



ಅಭ್ಯಾಸ ೧
ಭವತಃ ನಾಮ ಕಿಮ್ ?
ನಿಮ್ಮ ಹೆಸರು ಏನು? (ಪುರುಷರಿಗೆ)
ಭವತ್ಯಾಃ ನಾಮ ಕಿಮ್ ?
ನಿಮ್ಮ ಹೆಸರು ಏನು? ( ಸ್ತ್ರೀಯರಿಗೆ)
ಮಮ ನಾಮ
ನನ್ನ ಹೆಸರು
ಏಷ:
ಇವನು
ಸಃ
ಅವನು
ಏಷಾ
ಇವಳು
೭ 
ಸಾ 
ಅವಳು
ಏತತ್
ಇದು
ತತ್
ಅದು

ಮಮನಾಮ
ಮಮನಾಮ ನರಸಿಂಹಃ / ಮಮನಾಮ ರಮೇಶಃ / ಇದೇರೀತಿ  ಕೃಷ್ಣಃ , ರಾಮಃ , ರಾಘವಃ, ಸೋಮಶರ್ಮಃ , ಮಧುಸೂದನಃ , ವೆಂಕಟೇಶ್ವರಃ,  ನಾಗರಾಜಃ , ಗುರುರಾಜಃ ಎಂದು ಹೇಳಬಹುದು.
ಮಮನಾಮ ಸಾವಿತ್ರೀ/ ಮಮನಾಮ ಭಾರ್ಗವೀ / ಇದೇರೀತಿ , ಲಕ್ಷ್ಮೀ , ದೇವೀ , ಲತಾ , ಸೀತಾ , ರಾಧಾ , ಎಂದು ಹೇಳಬಹುದು.


ಏಷಃ  / ಸಃ
ಏಷಃ ಮಮ ಮಿತ್ರಮ್ ಈತ/ ಇವನು ನನ್ನ ಗೆಳೆಯ/ಮಿತ್ರ
ಇದೇ ರೀತಿ ಏಷಃ ಕೃಷ್ಣಃ , ಏಷಃ ರಾಮಃ , ಏಷಃ ರಾಘವಃ, ಏಷಃ ಸೋಮಶರ್ಮಃ , ಏಷಃ ಮಧುಸೂದನಃ ,
ಏಷಃ ವೆಂಕಟೇಶ್ವರಃ, ಏಷಃ ನಾಗರಾಜಃ , ಏಷಃ ಗುರುರಾಜಃ ಎಂದು ಹೇಳಬಹುದು.
ಸಃ ರಮೇಶಃ ಅವನು ರಮೇಶ
ಇದೇ ರೀತಿ  ಕೃಷ್ಣಃ , ರಾಮಃ , ರಾಘವಃ, ಸೋಮಶರ್ಮಃ , ಮಧುಸೂದನಃ , ವೆಂಕಟೇಶ್ವರಃ,  ನಾಗರಾಜಃ , ಗುರುರಾಜಃ ಎಂದು ಹೇಳಬಹುದು.

ಏಷಾ / ಸಾ
ಏಷಾ ಮಮ ಸಖೀ ಇವಳು ನನ್ನ ಗೆಳತಿ
ಇದೇ ರೀತಿ , ಏಷಾ ಲಕ್ಷ್ಮೀ , ಏಷಾ ದೇವೀ , ಏಷಾ ಲತಾ , ಏಷಾ ಸೀತಾ , ಏಷಾ ರಾಧಾ , ಎಂದು ಹೇಳಬಹುದು.
ಸಾ  ಸರಸ್ವತೀ ಅವಳು ಸರಸ್ವತೀ
ಇದೇ ರೀತಿ , ಸಾ ಲಕ್ಷ್ಮೀ , ಸಾ ದೇವೀ , ಸಾ ಲತಾ , ಸಾ ಸೀತಾ , ಸಾ ರಾಧಾ , ಎಂದು ಹೇಳಬಹುದು.



ಏತತ್ / ತತ್
ಏತತ್ ಇದು , ಏತತ್  ವಿಮಾನಮ್ ,  ಏತತ್ ಪುಸ್ತಕಮ್ ಇದೇರೀತಿ ಏತತ್ ವಾಹನಮ್ , ಏತತ್ ಪತ್ರಮ್ , ಏತತ್ ವಾತಾಯನಮ್ , ಏತತ್ ದ್ವಾರಮ್, ಏತತ್ ಲೇಖನಮ್ , ಏತತ್ ಭವನಮ್  ಎಂದು ಹೇಳಬಹುದು.
ತತ್ ಅದು , ಇದೇರೀತಿ ತತ್ ವಾಹನಮ್ , ತತ್ ಪತ್ರಮ್ , ತತ್ ವಾತಾಯನಮ್ , ತತ್ ದ್ವಾರಮ್, ತತ್ ಲೇಖನಮ್ , ತತ್ ಭವನಮ್  ಎಂದು ಹೇಳಬಹುದು.



ಭವತಃ ಗ್ರಾಮಃ?
ನಿಮ್ಮ ಗ್ರಾಮ/ಹಳ್ಳಿಯಾವುದು?
ಮಮಗ್ರಾಮ
ನನ್ನ ಗ್ರಾಮ/ಹಳ್ಳಿ
ಭವತಿ (ಸ್ತ್ರೀ)/ಭವಾನ್ (ಪುರುಷ) ಕುತಃ ಆಗತಾಃ
ತಾವು ಎಲ್ಲಿಂದ ಬಂದಿರಿ
ಅಹಂ ಗ್ರಾಮತಃ /ನಗರತಃ ಆಗತವಾನ್
ನಾನು ಹಳ್ಳಿಯಿಂದ/ ನಗರದಿಂದ ಬಂದೆನು
ಭವಾನ್/ಭವತೀ ಕುತ್ರ ಗಚ್ಛತೀ
ನೀವು ಎಲ್ಲಿಗೆ ಹೋಗುತ್ತೀರಿ?
ಭವಾನ್/ಭವತೀ ಕದಾ ಗಚ್ಛತೀ
ನೀವು ಯಾವಾಗ ಹೋಗುತ್ತೀರಿ?
ಕದಾ?
ಯಾವಾಗ?
ಕುತ್ರ?
ಎಲ್ಲಿ?
ಕಿಮರ್ಥಂ?
ಭವಾನ್ ಕಿಮರ್ಥಂ ನಾ ಆಗತವಾನ್?
ಏಕೇ/ ಏತಕ್ಕಾಗಿ?
ನೀವು ಏಕೆ ಬರಲಿಲ್ಲ?
ಕುತಃ?
ಎಲ್ಲಿಂದ?
ಕಿಂ?
ಏನು?
ಕತಿ? ಏತತ್ ಕತಿ ರೂಪ್ಯಕಾನಿ?
ಎಷ್ಟು? ಇದಕ್ಕೆ ಎಷ್ಟು ರೂಪಾಯಿ?
(ಪುರುಷ) ಕಃ?/  (ಸ್ತ್ರೀ) ಕಾ
ಯಾರು?

ಕುತಃ ಎಲ್ಲಿಂದ
(ಪುರುಷರು)    ಅಹಮ್  ಗ್ರಾಮತಃ ಆಗತವಾನ್, ನಗರತಃ ಆಗತವಾನ್, ಮಂದಿರತಃ ಆಗತವಾನ್, ಶಾಲಾತಃ ಆಗತವಾನ್, ಆಪಣತಃ ಆಗತವಾನ್ , ಗೃಹತಃ ಆಗತವಾನ್
(ಸ್ತ್ರೀಯರು) ಅಹಮ್  ಗ್ರಾಮತಃ ಆಗತವತೀ, ನಗರತಃ ಆಗತವತೀ, ಮಂದಿರತಃ ಆಗತವತೀ, ಶಾಲಾತಃ ಆಗತವತೀ, ಆಪಣತಃ ಆಗತವತೀ , ಗೃಹತಃ ಆಗತವತೀ

ಕುತ್ರ ಎಲ್ಲಿಗೆ
(ಸ್ತ್ರೀ/ಪುರುಷರಿಬ್ಬರಿಗೂ)
ಅಹಮ್  ಗ್ರಾಮಮ್ ಗಚ್ಛಾಮಿ , ಅಹಮ್ ನಗರಮ್ ಗಚ್ಛಾಮಿ , ಅಹಮ್ ಮಂದಿರಂ ಗಚ್ಛಾಮಿ ,  ಅಹಮ್ ಆಪಣಂ ಗಚ್ಛಾಮಿ, ಅಹಮ್ ಶಾಲಾಂ ಗಚ್ಛಾಮಿ , ಅಹಮ್ ಗೃಹಂ ಗಚ್ಛಾಮಿ.

ಕದಾ ಯಾವಾಗ
(ಸ್ತ್ರೀ/ಪುರುಷರಿಬ್ಬರಿಗೂ)
ಅಹಂ ಪ್ರಾತಃ ಗಚ್ಛಾಮಿ , ಅಹಂ ಸಾಯಂ ಗಚ್ಛಾಮಿ , ಅಹಂ ಆನಂತರಂ ಗಚ್ಛಾಮಿ , ಅಹಂ ಇದಾನೀಂ ಗಚ್ಛಾಮಿ, ಅಹಂ ಶ್ವಃ ಗಚ್ಛಾಮಿ, ಅಹಂ ಪರಶ್ವಃ ಗಚ್ಛಾಮಿ, ಅಹಂ ಪ್ರಪರಶ್ವಃ ಗಚ್ಛಾಮಿ

ಕಿಂ ಏನು
ಏತತ್ ಕಿಂ ಇದು ಏನು? ಕಿಂ ಏಷಃ ರಮೇಶಃ ವಾ? - ಇವನು ರಮೇಶನೇ?
ಕಿಂ ಏತತ್ ಪನಸ ಫಲಂ ವಾ? ಇದು ಹಲಸಿನಹಣ್ಣೇ?


ಕಃ ಯಾರು? (ಪುರುಷರಿಗೆ)
ಏಷಃ ಕಃ? ಇವನು ಯಾರು?,    ಕಃ ಸುರೇಶಃ ?  ಯಾರು ಸುರೇಶ?


ಕಾ ಯಾರು  (ಸ್ತ್ರೀಯರಿಗೆ)

ಏಷಾ ಕಾ? -  ಇವಳು ಯಾರು?    ಕಾ ಸರಸ್ವತೀ? -  ಯಾರು ಸರಸ್ವತೀ?

ಕತಿ ಎಷ್ಟು
ಏತಸ್ಯ ಮೂಲ್ಯಂ ಕತಿ? ಇದರ ಬೆಲೆ ಎಷ್ಟು?   ಕತಿ ಪತ್ರಿಕಾನಿ ಸಂತಿ ? ಎಷ್ಟು ಪತ್ರಿಕೆಗಳು ಇವೆ?
ಕತಿ ಜನಾಃ ಸಂತಿ ?   ಎಷ್ಟು ಜನರು ಇದ್ದಾರೆ?




ಇದಾನೀಂ
ಈಗ
ಅನಂತರಂ
ಆಮೇಲೆ
ಶ್ವಃ
ನಾಳೆ
ಪರಶ್ವಃ
ನಾಡಿದ್ದು
ಪ್ರ ಪರಶ್ವಃ
ಆಚೆ ನಾಡಿದ್ದು
ಅದ್ಯ
ಇವತ್ತು
ಹ್ಯಃ
ನಿನ್ನೆ
ಪರಹ್ಯಃ
ಮೊನ್ನೆ
ಪ್ರಪರಹ್ಯಃ
ಆಚೆಮೊನ್ನೆ
ತ್ವರಿತಃ
ತಕ್ಷಣ
ಸಂತಿ
ಇವೆ

ಅಸ್ತಿ
ಇದೆ
ಅಹಂ ನಾ ಜಾನಾಮಿ
ನನಗೆ ತಿಳಿದಿಲ್ಲ
ಕಿಮರ್ಥಂ ನ ಭವತಿ
ಏಕೆ ಆಗುವುದಿಲ್ಲ?
ಅಥಃ ಕಿಮ್
ಮತ್ತೇನು?
ನೈವ ಖಲು
ಇಲ್ಲ ಅಲ್ವಾ
ಆಗಚ್ಛತು
ಬನ್ನಿ
ಉಪವಿಷತು
ಕುಳಿತುಕೊಳ್ಳಿ
ಜ್ಞಾತಂ ವಾ
ತಿಳಿಯಿತೇ?
ಕಥಂ ಆಸೀತ್
ಹೇಗಿತ್ತು?
ತದ್ ವಾ ಹ್ಯಃ ಏವ ಸಮಾಪ್ತಂ
ಅದಾ? ನೆನ್ನೆಯೇ ಮುಗಿಯಿತು.
ಇದಾನೀಂ ಏವ
ಈಗತಾನೇ
ಆಮ್ ಇದಾನೀಂ
ಹೌದು ಈಗಲೇ
ಪ್ರಾಪ್ತಂ ಕಿಲ
ಸಿಕ್ಕಿತು ತಾನೇ?
ಕಸ್ಮಿನ್ ಸಮಯೇ
ಯಾವಸಮಯದಲ್ಲಿ?
ಪಂಚವಾದನೇ
ಐದು ಗಂಟೆಗೆ
ಅವಶ್ಯಕಂ ನ ಆಸೀತ್
ಅವಶ್ಯಕತೆ ಇರಲಿಲ್ಲ


ಮಹಾನ್ ಆನಂದಃ
ತುಂಬಾ ಸಂತೋಷ
ಪ್ರಯತ್ನಂ ಕರೋಮಿ
ಪ್ರಯತ್ನ ಮಾಡುತ್ತೇನೆ
ನ ಶಕ್ಯತೇ ಭೋ
ಸಾಧ್ಯವಿಲ್ಲ ಮಾರಾಯಾ
ತಥಾ ನಾ ವದತು
ಹಾಗೆ ಹೇಳಬೇಡಿ
ಕದಾ ದದಾತಿ
ಯಾವಾಗ ಕೊಡುತ್ತೀರಿ
ಅಹಂ ಕಿಂ ಕರೋಮಿ
ನಾನು ಏನು ಮಾಡಲಿ?
ಕತಿ ಜನಾಃ ಸಂತಿ
ಎಷ್ಟು ಜನ ಇದ್ದಾರೆ?
ಪುನಃ ಆಗಚ್ಛತು
ಮತ್ತೆ ಬನ್ನಿ
ಅವಶ್ಯಂ ಆಗಚ್ಛಾಮಿ
ಅವಶ್ಯವಾಗಿ ಬರುತ್ತೇನೆ
ಭವಾನ್/ಭವತಿ ಕಥಂ ಅಸ್ತಿ
ನೀವು ಹೇಗಿದ್ದೀರಿ?
ಗೃಹೇ ಸರ್ವಂ ಕುಶಲಂ ವಾ?
ಮನೆಯಲ್ಲಿ ಎಲ್ಲರೂ ಕ್ಷೇಮವೇ?
ಆಮ್ ಸರ್ವಂ ಕುಶಲಂ
ಹೌದು ಎಲ್ಲರೂ ಚೆನ್ನಾಗಿದ್ದಾರೆ/ ಕ್ಷೇಮ.
ಕಾ ವಾರ್ತಾ?
ಏನು ವಿಶೇಷ?
ಭವಾನೇವ ಶ್ರಾವಯತು
ನೀವೇ ಹೇಳಬೇಕು


ಕಿಂ ಮೇಲನಂ ಬಹು ವಿರಲಂ ಜಾತಮ್?
ಏನಪ್ಪ ಸಿಗೋದು ತುಂಬಾ ಕಡಿಮೆ ಆಗಿದೆ?
ಏನು ನಿಮ್ಮ ಭೇಟಿ ತುಂಬಾ ವಿರಳವಾಗಿದೆ?
ಜಲಂ ಅವಶ್ಯಕಂ ವಾ
ನೀರು ಬೇಕೆ?
ಮಾಸ್ತು / ನೈವ
ಬೇಡ , ಅವಶ್ಯವಿಲ್ಲ
ಕಥಮ್ ಆಗಮನಮ್ ಅಭವತ್
ಹೇಗೆ ಬರೋಣವಾಯಿತು
ಮಾರ್ಗಃ ವಿಸ್ಮೃತಃ ಕಿಮ್?
ದಾರಿ ಮರೆತು ಹೋಯಿತೇ?
ಚಾಯಂ/ಜಲಂ ಪಿಬತಿ ಕಿಮ್
ಟೀ/ನೀರು ಕುಡಿಯುತ್ತೀರಾ?
ನೈವ ಇದಾನೀಮ್ ಏವ ಪೀತ್ವಾ ಆಗಚ್ಛಾಮಿ
ಬೇಡ ಈಗತಾನೇ ಕುಡಿದು ಬಂದೆ.
ಶೈತ್ಯಂ ಅಸ್ತಿ ಸ್ವಲ್ಪಂ ಚಾಯಂ ಪಿಬತು
ಚಳಿಯಿದೆ, ಸ್ವಲ್ಪ ಟೀ ಕುಡಿಯಿರಿ.
ಭವತು ಕಿಂಚಿತ್ ದದಾತು
ಆಗಲಿ ಸ್ವಲ್ಪ ಕೊಡಿ
ಇದಾನೀಂ ಮಯಾ ಗಂತವ್ಯಂ
ನಾನು ಈಗಲೇ ಹೋಗಬೇಕು
ತಿಷ್ಠತು, ಭೋಜನಂ ಕೃತ್ವಾ ಗಚ್ಛತು
ನಿಲ್ಲಿ, ಊಟಮಾಡಿಕೊಂಡು ಹೋಗಿರಿ
ನ ಇದಾನೀಂ ಭೋಜನಂ ನ ಕರೋಮಿ
ಇಲ್ಲ ಈಗ ಊಟ ಮಾಡುವುದಿಲ್ಲ
ನ ಪುನಃ ಕದಾಚಿತ್ ಖಾದಾಮಿ
ಬೇಡ, ಇನ್ನೊಮ್ಮೆ ಯಾವಾಗಲಾದರೂ ಊಟಮಾಡುತ್ತೇನೆ
ಪುನಃ ಕದಾ ಮೇಲಿಷ್ಯಾಮಃ
ಮತ್ತೆ ಯಾವಾಗ ಸೇರೋಣ/ ಭೇಟಿಯಾಗೋಣ




ಭವಾನ್ ಕಿಮ್ ಕಾರ್ಯಂ ಕುರ್ವನ್ ಅಸ್ತಿ?
ನೀವು ಯಾವ ಕೆಲಸ ಮಾಡುತ್ತಿದ್ದೀರಿ
ಅಹಂ ಆಚಾರ್ಯಃ ಅಸ್ಮಿ
ನಾನು ಅಧ್ಯಾಪಕನಾಗಿದ್ದೇನೆ
ಅಹಂ ವೈದ್ಯಃ ಅಸ್ಮಿ
ನಾನು ವೈದ್ಯನಾಗಿದ್ದೇನೆ.
ಅಹಂ ತು ಯಂತ್ರಾಗಾರೆ ಕಾರ್ಯಮ್ ಕರೋಮಿ
ನಾನು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತೇನೆ
ಕೃಪಯಾ ಪುಸ್ತಕಂ ದದಾತು
ದಯಮಾಡಿ ಪುಸ್ತಕವನ್ನು ನೀಡಿರಿ/ಕೊಡಿ
ರಮೇಶಃ ಅಸ್ತಿ ಕಿಮ್?
ರಮೇಶ ಇದ್ದಾನೆಯೇ? / ಇದ್ದಾರೆಯೇ?
ಕಿಮರ್ಥಂ ಏತಾವಾನ್ ವಿಲಂಬಃ
ಏಕೆ ಇಷ್ಟೋಂದು ತಡವಾಯಿತು?
ಕಿಮಪಿ ನ ಭವತಿ
ಏನೂ ಆಗಲ್ಲ
ಸ್ವೀಕರೋತು
ತೆಗೆದುಕೊಳ್ಳಿ/ ಸ್ವೀಕರಿಸಿ
ಭೋಜನಂ ಸಿದ್ಧಂ
ಊಟ ಸಿದ್ಧವಾಗಿದೆ
ಪರಿವೇಷಯತು
ಬಡಿಸಿರಿ
ಪರ್ಯಾಪ್ತಮ್
ಸಾಕು
ಸ್ವಲ್ಪಂ ದದಾತು
ಸ್ವಲ್ಪ ನೀಡಿರಿ
ಅನ್ನಂ
ಅನ್ನ
ರೋಟಿಕಾ
ರೊಟ್ಟಿ
ಶಾಕಂ
ತರಕಾರಿ
ಸೂಪಃ
ತೊವ್ವೆ/ಸಾರು
ಲವಣಂ
ಉಪ್ಪು
ಓದನಂ
ಅನ್ನಂ
ದುಗ್ಧಮ್(ಕ್ಷೀರಂ)
ಹಾಲು
ದಧಿ
ಮೊಸರು
ಪಾಯಸಂ
ಪಾಯಸ
ಮಿಷ್ಟಾನ್ನಮ್
ಸಿಹಿ
ಭೋಜನಮ್ ಬಹು ಸ್ವಾದಿಷ್ಠಂ ಅಸ್ತಿ
ಊಟ ಬಹಳ ರುಚಿಯಾಗಿ ಇದೆ
ಕಿಮ್ ಅಭವತ್
ಏನಾಯಿತು?
ಜ್ವರಃ ಕಾಸಃ ಶಿರೋವೇದನಮ್
ಜ್ವರ, ಕೆಮ್ಮು, ತಲೆನೋವು.



ವೈದ್ಯಂ ದರ್ಶಯತು
ವೈದ್ಯರಿಗೆ ತೋರಿಸಿ
ಔಷಧಂ ಸ್ವೀಕೃತವಾನ್
ಔಷಧಿಯನ್ನು ತೆಗೆದುಕೊಂಡಿದ್ದೇನೆ.
ತತ್ರ ಸಮ್ಯಕ್ ಪಶ್ಯತ್
ಅಲ್ಲಿ ಸರಿಯಾಗಿ ನೋಡಿರಿ
ಸಾ ಕಿಮ್ ಪೃಚ್ಛತಿ
ಅವಳು/ಅವರು ಏನು ಕೇಳಿದ್ದು
ಅಹಂ ಭವಂತಂ ನ ತ್ಯಜಾಮಿ
ನಾನು ನಿಮ್ಮನ್ನು ಬಿಡುವುದಿಲ್ಲ.
ಫಲಂ ತು ಖಾದತು
ಹಣ್ಣಾದರು ತಿನ್ನು
ತಿಷ್ಠತು ಇದಾನೀಮೇವ ದದಾಮಿ
ನಿಲ್ಲು ಈಗಲೇ ಕೊಡುತ್ತೇನೆ.
ಅಹಂ ತಂ ಪ್ರೇಷಯುಷ್ಯಾಮಿ
ನಾನು ಅವರನ್ನು/ಅವನನ್ನು ಕಳುಹಿಸುತ್ತೇನೆ
ಮಾತಾ ವಸ್ತ್ರಂ ಪ್ರಕ್ಷಾಲಯತಿ
ಅಮ್ಮ ಬಟ್ಟೆಗಳನ್ನು ಒಗೆಯುತ್ತಾಳೆ
ಭವಾನ್ ಪ್ರಾತಃ ಕದಾ ಉತ್ತಿಷ್ಠತಿ
ನೀನು/ನೀವು ಬೆಳಗ್ಗೆ ಎಷ್ಟೋತ್ತಿಗೆ ಏಳುತ್ತೀರಿ
ಭವತಃ ನಾಮ ನ ಸ್ಮರಾಮಿ
ನಿಮ್ಮ ಹೆಸರು ನೆನಪಿಗೆ ಬರುತ್ತಿಲ್ಲ