Sunday, April 17, 2011

ಪುನರ್ನವ ೨೦೧೦

೧. ರಾಮನಿಗೆ ಹಣ್ಣುಕೊಟ್ಟವಳು - ಶಬರಿ

೨. ಯಾರ ನೂರು ತಪ್ಪುಗಳನ್ನು ಕೃಷ್ಣ ಕ್ಷಮಿಸಿದ – ಶಿಶುಪಾಲ

೩. ಜನಕನಿಗೆ ಶಿವಧನಸ್ಸನ್ನು ನೀಡಿದವರು – ಶಿವ

೪. ಅಕ್ಷಯ ಪಾತ್ರೆಯನ್ನು ಪಾಂಡವರಿಗೆ ನೀಡಿದವರು – ಸೂರ್ಯ

೫. ದೃತರಾಷ್ಟ್ರನಿಗೆ ನಡೆಯುತ್ತಿದ್ದ ಯುದ್ಧವನ್ನು ಕುಳಿತಲ್ಲಿಂದಲೇ ನೋಡಿ ಹೇಳಿದವನು – ಸಂಜಯ

೬. ರಾಮ ಸೀತೆಗೆ ಕಳುಹಿಸಿದ ಮುದ್ರಿಕೆ – ಮುದ್ರೆಯುಂಗುರ

೭. ಶಂತನುವಿನ ಇಬ್ಬರು ಪತ್ನಿಯರು – ಗಂಗೆ ಮತ್ತು ಸತ್ಯವತಿ.

೮. ಜಾನಕಿಗೆ ಇರುವ ಇತರ ಹೆಸರುಗಳು – ಮೈಥಿಲಿ, ಸೀತೆ , ವೈದೇಹಿ , ಭೂಮಿಜಾ

೯. ರಾವಣನ ಸಹೋದರರು – ವಿಭೀಷಣ ಮತ್ತು ಕುಂಭಕರ್ಣಾ

೧೦. ದೃತರಾಷ್ಟ್ರನಿಗೆ ಇದ್ದ ಮಕ್ಕಳು – ೧೦೦+೧

೧೧. ೭ ಬೆಟ್ಟಗಳನ್ನು ಹೊಂದಿದ ದೇವಾಲಯ – ತಿರುಪತಿ

೧೨. ರಾಮ ಪೂಜಿಸುತ್ತಿದ್ದ ವಿಭೀಷಣನಿಗೆ ನೀಡಿದ ವಿಗ್ರಹ ಎಲ್ಲಿದೆ. ಶ್ರೀರಂಗಂ ನಲ್ಲಿದೆ. ರಂಗನಾಥ

೧೩. ದುರ್ಯೋಧನನ ಮಾವ – ಶಕುನಿ

೧೪. ಬಾಲಕೃಷ್ಣನ ದೇವಾಲಯ ಎಲ್ಲಿದೆ – ಗುರುವಾಯೂರು , ಕೇರಳ

೧೫. ಅನ್ನಪೂರ್ಣೇಶ್ವರಿ ದೇವಾಲಯ ಎಲ್ಲಿದೆ – ಹೊರನಾಡು

೧೬. ಕೃಷ್ಣ ಆಳಿದ ನಗರ – ದ್ವಾರಕ

೧೭. ಹಿಮದ ಶಿವಲಿಂಗ ಇರುವ ಸ್ಥಳ – ಅಮರನಾಥ

೧೮. ತನ್ನ ರಥಯಾತ್ರೆಯ ಮೂಲಕ ಪ್ರಸಿದ್ಧವಾದುದು – ಪುರಿಜಗನ್ನಾಥ ರಥಯಾತ್ರೆ

೧೯. ಸೀತೆಯನ್ನು ಅಶೋಕವನದಲ್ಲಿ ನೋಡಿಕೊಂಡವರು – ತ್ರಿಜಟಾ

೨೦ . ಮಹಾಭಾರತ ಯುದ್ಧನಡೆದ ಸ್ಥಳ – ಕುರುಕ್ಷೇತ್ರ

೨೧. ಬಸವಣ್ಣನವರು ಹುಟ್ಟಿದ ಸ್ಥಳ – ಬಾಗೇವಾಡಿ

೨೨. ಸೀತೆ ಲಂಕೆಯಲ್ಲಿ ಇದ್ದ ಸ್ಥಳ – ಅಶೋಕವನ

೨೩. ಹನುಮಂತನ ಕಥೆ ರಾಮಾಯಣದಲ್ಲಿ ಯಾವ ಕಾಂಡದಲ್ಲಿ ಇದೆ – ಸುಂದರಕಾಂಡ

೨೪. ಲಕ್ಷ್ಮಣನ ತಾಯಿ – ಸುಮಿತ್ರಾ

೨೫. ಧರ್ಮರಾಯನ ರಾಜಧಾನಿಯಾಗಿದ್ದಸ್ಥಳ : ಇಂದ್ರಪ್ರಸ್ಥ ಇವತ್ತಿನ ದೆಹಲಿ

೨೬. ರಾಮ ಸೇತುವಿನ ನಿರ್ಮಾಣದಲ್ಲಿ ಮುಖ್ಯಪಾತ್ರವಹಿಸಿದವರು – ನಲ , ನೀಲ

೨೭. ಭೀಮನನ್ನು ವಿವಾಹವಾದ ರಾಕ್ಷಸಿ – ಹಿಡಿಂಬಾ

೨೮. ಸೀತಾಪಹರಣ ಕಥೆ ಎಲ್ಲಿ ಕಂಡುಬರುತ್ತದೆ – ಅರಣ್ಯಕಾಂಡ

೨೯. ದಕ್ಷಿಣೇಶ್ವರದ ಸಂತ – ರಾಮಕೃಷ್ಣ ಪರಮಹಂಸ

೩೦. ರಾಮನ ಬಿಲ್ಲಿನ ಹೆಸರು – ಕೋದಂಡ

೩೧. ಪಾಂಡುಮಹಾರಾಜನ ಪತ್ನಿಯರು – ಕುಂತಿ, ಮಾದ್ರಿ,

೩೨. ರಾವಣನ ತಾಯಿ – ಕೇಕಸಿ

೩೩. ಶ್ಯಮಂತಕ ಮಣಿಗಾಗಿ ಕೃಷ್ಣನೊಡನೆ ಹೋರಾಟಮಾಡಿದವರು – ಜಾಂಬವಂತ

೩೪. ಗೋಕುಲದ ಜನರು ಅರ್ಚಿಸಿದ ಪರ್ವತ – ಗೋವರ್ಧನ

೩೫. ಶ್ರೀಕೃಷ್ಣ ದೇವಲೋಕದಿಂದ ತಂದ ಹೂವಿನ ಗಿಡ – ಪಾರಿಜಾತ

೩೬. ಗೀತಗೋವಿಂದ ಬರೆದವರು – ಜಯದೇವ

೩೭. ೧೦ನೇ ಸಿಕ್ ಗುರು – ಗುರುಗೋವಿಂದ ಸಿಂಗ್

೩೮. ನರಸಿಂಹ ಅವತಾರದ ಕಾಲದಲ್ಲಿ ಜಯ ವಿಜಯರು ಯಾವ ಹೆಸರು ಹೊಂದಿದ್ದರು – ಹಿರಣ್ಯಾಕ್ಷ , ಹಿರಣ್ಯಕಶ್ಯಪ

No comments:

Post a Comment